February 26, 2008

ನಗರ ಸ್ವರ


10

ಇದು ದ್ವಿಚಕ್ರ ನಗರ
ವೇಷ ಮರೆಸಿದವರಿಗೆ ಬಂಡಿ ಅನ್ನ

ಬಕಾಸುರರ ಸಾಕಿದವರಿಗಷ್ಟೇ ಅಭಯ.

ಕುಂಬಾರನ ಮನೆಯಲ್ಲಿ

ದೊಣ್ಣೆ ನಾಯಕರಿಗೇನು ಕೆಲಸ? ಗೊತ್ತಿಲ್ಲ

ಸದಾ ಹೊರಟು-ನಿಂತವರೇ ಎಲ್ಲ .

ಎಣ್ಣೆ ನೋಡುತ್ತ ಮೀನು ಕಚ್ಚಿ ಎಳೆವವರು

ಗುರುವಿಗಿದಿರು ಶಿಷ್ಯನನ್ನೇ ಹೆದೆಯೇರಿಸುವರು;

ಒಬ್ಬಳಿಗೆ ಐವರು ಹೆಚ್ಚಾಯಿತೆ ? ಇಲ್ಲ

ನೂರ ಐದಾದರೂ ಅಡ್ಡಿಯಿಲ್ಲ
ಕೃಷ್ಣನಂತೂ ಇತ್ತ ಬರುವುದಿಲ್ಲ .

1 comments:

Sharath Akirekadu February 26, 2008 at 11:19 PM  

ಅದ್ಬುತ ಹೋಲಿಕೆ.ಸಿಂಪ್ಲಿ ಸೂಪರ್......
ನಗರ ಸ್ವರ ಸೆಂಚುರಿ ಆಗಲಿ


ಇಂತಿ
ಶರತ್.ಎ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP