June 10, 2008

ಸಂಗ್ರಹ ಬುದ್ಧಿ

'ಅರ್ಥ'ವತ್ತಾಗಿರಲಿ
ನಂದನಾ ಸೇನ್ ಮುಖ್ಯ ಭೂಮಿಕೆಯಲ್ಲಿರುವ `ರಂಗ್ ರಸಿಯಾ' (
RANG RASIYA-Colours of Passion) ಸಿನಿಮಾ, ವಿಶ್ವ ಪ್ರಸಿದ್ಧ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಮೊನ್ನೆ ಮೊನ್ನೆ ಪ್ರದರ್ಶನಗೊಂಡಿತು. ಕಲಾವಿದ ರಾಜಾ ರವಿವರ್ಮನ ಪ್ರೇರಣಾ ಶಕ್ತಿಯಾದ ಸುಗಂಧ ಎಂಬ ದೇವದಾಸಿಯ ಪಾತ್ರವನ್ನು ಅದರಲ್ಲಿ ನಂದನಾ ಸೇನ್ ನಿರ್ವಹಿಸಿದ್ದಾಳೆ. ಆಕೆಯೊಂದಿಗೆ ಮಾತಾಡಲು ಕೇತನ್ ಮೆಹ್ತಾ ಮೊದಲ ಬಾರಿ ಅವಳ ಫ್ಲ್ಯಾಟ್‌ಗೆ ಹೋದಾಗ, ರವಿವರ್ಮಾರ ಎರಡು ದೊಡ್ಡ ಚಿತ್ರಗಳನ್ನು ನೋಡಿ ಅಚ್ಚರಿಪಟ್ಟರಂತೆ. ಸಿಕ್ಕಾಪಟ್ಟೆ ಚಿತ್ರ ಬಿಡಿಸುವ ಹುಚ್ಚಿರುವ ನಂದನಾ ಅಪರೂಪಕ್ಕೆ ಪದ್ಯಗಳನ್ನೂ ಬರೆಯುತ್ತಾಳಂತೆ.
ಬಾಲಿವುಡ್ ಮುಖ್ಯವಾಹಿನಿಯಿಂದ ದೂರವಿರುವ ಆದರೆ ಮುಖ್ಯವಾಹಿನಿ, ಕಮರ್ಷಿಯಲ್, ಕಲಾತ್ಮಕ ಎನ್ನುವುದೆಲ್ಲಾ ಇಲ್ಲ ಎನ್ನುವ ಈಕೆ ಯಾರು ಗೊತ್ತೆ? ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಮಗಳು !` ಸಿನಿಮಾ ಎಂಬುದು ಜನರು ಬಯಸಿದ್ದನ್ನು ಕೊಡುವ ಮಾಧ್ಯಮ. ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗುವುದಕ್ಕೆ,, ಅವರಲ್ಲಿ ಆಸೆ ಹುಟ್ಟಿಸುವುದಕ್ಕಿರುವ ಬಾಡಿಗೆ ವ್ಯಕ್ತಿಗಳೇ ನಟರು !' ಅಂತಾಳೆ ಈಕೆ .

ಬಚ್ಚನ್ ಬಚಾವ್

ಪೂಜೆಗಾಗಿ ದೇವಾಲಯಕ್ಕೆ ಹೋಗುವುದು ಸಾಂವಿಧಾನಿಕವಾಗಿಯೂ ವೈಯಕ್ತಿಕ ವಿಚಾರ. ಅದು ಸಾರ್ವಜನಿಕರಿಗೆ ತಿಳಿಯಬೇಕೆಂಬುದೂ ನನ್ನ ಉದ್ದೇಶವಾಗಿರಲಿಲ್ಲ. ಹಾಗಿದ್ದೂ ಆ ಬಗ್ಗೆ ಸಂದೇಹ ಪಡುವುದಕ್ಕೆ ಮಾಧ್ಯಮದವರಿಗೆ ಹಕ್ಕಿದೆ. ನಾನದನ್ನು ಒಪ್ಪ ಬಹುದು ಅಥವಾ ಒಪ್ಪದಿರಬಹುದು. ಆದರೆ ಎಲ್ಲವನ್ನೂ ತಿಳಿಸಬೇಕೆನ್ನುವ ಮಾಧ್ಯಮದವರ ಹಕ್ಕಿಗಾಗಿ ನಾನು ಬದುಕಿನ ಜತೆ ಹೋರಾಡಲೇಬೇಕಾಗಿದೆ !' ಹೀಗೆ ಮಾಧ್ಯಮಗಳಿಗೆ ಟಾಂಗ್ ಕೊಟ್ಟವರು ನಟ ಅಮಿತಾಬ್ ಬಚ್ಚನ್. ಅವರು ಇತ್ತೀಚೆಗೆ ಮಗ-ಸೊಸೆ ಜತೆಗೆ, ಮುಂಬಯಿಯ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬೆಳಬೆಳಗ್ಗೆ ಪಾದಯಾತ್ರೆ ಮಾಡಿದ್ದರು . ಆ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಪ್ರವೇಶ ನಿಷೇಧಿಸಿ, ಹಲವರು ಪರದಾಡಿದ್ದು ಮಾಧ್ಯಮಗಳಿಗೆ ಗ್ರಾಸವಾಯಿತು. `ಬಿಗ್‌ಅಡ್ಡಾ'ದಲ್ಲಿ ಬ್ಲಾಗಿಂಗ್ ಶುರು ಮಾಡಿರುವ ಅಮಿತಾಬ್ ಆ ಬಗ್ಗೆ ಸೊಗಸಾಗಿ ಉತ್ತರಿಸಿರುವುದು ನಟನ ಮೇಲಿನ ಪ್ರೀತಿ ಹೆಚ್ಚಿಸುವಂತಿದೆ.

2 comments:

Anonymous,  June 10, 2008 at 2:14 PM  

ನಂದನಾ ಸೇನ್, ನಂದಿತಾ ಅಲ್ಲ.

Anonymous,  June 12, 2008 at 7:42 PM  

ಕರೆಕ್ಟು ಸರ್. ನಂದ ನಂದಿತಾ ಅಂತ ಓದಿ ಓದಿ ಹಂಗಾಗಿರಬೇಕು ! -ಚಂ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP