'ಹುಟ್ಟು' ಹಾಕಿದವನ ದೋಣಿಯಲ್ಲಿ ಬರಿಗೈ ಬೀಸುತ್ತ...
ಹಳ್ಳಿಯಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು ಆಯ್ಕೆ ಎಂಬಂತೆ ಪರಿವರ್ತಿಸಿಕೊಂಡವರು ಸತ್ಯಮೂರ್ತಿ ದೇರಾಜೆ. ತಾನು ಇರುವಲ್ಲೆ ಇದ್ದು ಅರಳುವುದು, ಸುತ್ತಲಿನ ಜನರ ನಡುವೆ ಅರ್ಥಪೂರ್ಣವಾಗುವುದು ಅವರಿಗೆ ಮುಖ್ಯವಾಯಿತು. ಐವರ್ನಾಡು-ಚೊಕ್ಕಾಡಿಗಳಂತಹ ಹಳ್ಳಿಗಳ ಆರೋಗ್ಯವನ್ನು ಕಾಪಾಡುವಲ್ಲಿ ಅವರ ಕಾರ್ಯ ದೊಡ್ಡದು. ಸತ್ಯಮೂರ್ತಿ ಊರಿನ ಮ್ಯಾನೇಜರ್! ಅವರ ಸಾರ್ವಜನಿಕ ಬದುಕಿನ ಮುಖ್ಯ ಕ್ಷೇತ್ರಗಳಾದ- ರಾಜಕೀಯ, ದೇವಸ್ಥಾನ, ಸಾಹಿತ್ಯ, ಯಕ್ಷಗಾನಗಳು ಎಲ್ಲಿಯೂ ಒಂದರೊಳಗೊಂದು ಸೇರಿ ಅವರಿಗಾಗಲಿ ಇತರರಿಗಾಲಿ ಸಮಸ್ಯೆ ಸೃಷ್ಟಿಸಲಿಲ್ಲ.
ಅವರು 'ಮಾತಿನೊಳಗೆ ಜಾಣ'. ಯಕ್ಷಗಾನ ತಾಳಮದ್ದಳೆಯ ಅರ್ಥ ನಿರ್ಮಾಣ ಕ್ರಮದಲ್ಲಿ ಅವರು 'ಕರುಣಾಳು ಅರ್ಥಧಾರಿ'. ಬದುಕಾಗಲಿ, ಅರ್ಥಗಾರಿಕೆಯಾಗಲಿ ಖಂಡನೆಯ ದಾರಿ ಅವರದಲ್ಲ. ಇದಿರು ಅರ್ಥಧಾರಿಯ ಮಾತಿಗೆ ಮೌನವಾಗಿದ್ದೂ ಕೇಳುಗರಲ್ಲೇ ಸ್ಪಂದನ ಹುಟ್ಟುವಂತೆ ಮಾಡಬಲ್ಲವರಾಗಿದ್ದರು ಅವರು. ಆಗ ಸತ್ಯಮೂರ್ತಿಯವರ ಮೌನವೂ ಕೇಳುಗರಲ್ಲಿ ಮೆಚ್ಚುಗೆಯ ಮಾತಾಗುತ್ತಿತ್ತು. ಅದು ಈಗಲೂ ಮುಂದುವರಿದಿದೆ.
('ನೆನಪಿನುಂಗುರ-ಹಳ್ಳಿ ಹಾದಿಯಲಿ ನೆನೆವ ಪದಗಳು' ಪುಸ್ತಕದಿಂದ)
0 comments:
Post a Comment